Thursday, October 23, 2025

Crop damage compensation:ಬೆಳೆ ಹಾನಿ ರೈತರಿಗೆ ಗುಡ್‌ನ್ಯೂಸ್..30 ದಿನದಲ್ಲಿ ಹಣ ಜಮಾ

  ISARESOURCEINFO       Thursday, October 23, 2025
Crop damage compensation:ಬೆಳೆ ಹಾನಿ ರೈತರಿಗೆ ಗುಡ್‌ನ್ಯೂಸ್..30 ದಿನದಲ್ಲಿ ಹಣ ಜಮಾ



ರಾಜ್ಯದಲ್ಲಿ ಅತಿವೃಷ್ಟಿ & ನೆರೆ ಹಾವಳಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ಪಾವತಿ ಪ್ರಕ್ರಿಯೆ ಆರಂಭವಾಗಿದೆ.

ಮುಂದಿನ 30 ದಿನಗಳಲ್ಲಿ ಎಲ್ಲಾ ಸಂತ್ರಸ್ತ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಹಣ ಜಮಾ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಒಟ್ಟು 12.54 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಸುಮಾರು ₹2000 ಕೋಟಿ ರೂ. ಪರಿಹಾರ ಪಾವತಿಗೆ ಮೀಸಲಿಡಲಾಗಿದೆ.

ಸೆಪ್ಟೆಂಬ‌ರ್ ಮೊದಲ ವಾರದಲ್ಲಿ 5.29 ಲಕ್ಷ ಹೆಕ್ಟೇ‌ರ್ ಬೆಳೆ ನಷ್ಟವಾಗಿದ್ದರೆ, ಸೆಪ್ಟೆಂಬ‌ರ್ ಅಂತ್ಯದ ಮಳೆಯಿಂದ ಮತ್ತಷ್ಟು 7.24 ಲಕ್ಷ ಹೆಕ್ಟೇ‌ರ್ ಹಾನಿಯಾಗಿದೆ.

ಕಲಬುರಗಿ, ಯಾದಗಿರಿ, ವಿಜಯಪುರ, ಬೀದ‌ರ್ ಜಿಲ್ಲೆಗಳಲ್ಲಿ ಜಂಟಿ ಸಮೀಕ್ಷೆ ನಡೆಯುತ್ತಿದ್ದು, 10 ದಿನಗಳಲ್ಲಿ ಪೂರ್ಣಗೊಳ್ಳಲಿದೆ.


logoblog

Thanks for reading Crop damage compensation:ಬೆಳೆ ಹಾನಿ ರೈತರಿಗೆ ಗುಡ್‌ನ್ಯೂಸ್..30 ದಿನದಲ್ಲಿ ಹಣ ಜಮಾ

Previous
« Prev Post